ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಪ್ರಕ್ರಿಯೆಯು ಕಳೆದ ಎರಡು ಮೂರು ಕಂತಿನ ಹಣ ಸ್ಥಗಿತಗೊಳ್ಳುವ ಮೂಲಕ ಹಣ ಬರುತ್ತದೆಯೇ ಇಲ್ಲವೇ ಎಂದು ಜನರು ಗೊಂದಲದಲ್ಲಿದ್ದು, ಈಗ ಈ ಗೊಂದಲಗಳಿಗೆ ಖುದ್ದು ಸಿಎಂ ಸಿದ್ದರಾಮಯ್ಯನವರೇ ತೆರೆ ಎಳೆದಿದ್ದಾರೆ.
ಬಾಕಿ ಉಳಿದಿರುವ 2 ಕಂತಿನ ಹಣ ಶೀಘ್ರದಲ್ಲೇ ಜಮೆ!
ರಾಜ್ಯ ಸರ್ಕಾರದ ಈ ಬಾರಿಯ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಗೃಹಾಲಕ್ಷ್ಮಿ ಯೋಜನೆಯಲ್ಲಿ ಮಹಿಳೆಯರು ಪ್ರತೀ ತಿಂಗಳು 2000 ರೂ. ಹಣವನ್ನು ಪಡೆಯುತ್ತಿದ್ದರು ಹಾಗೂ ಈ ಯೋಜನೆಯಿಂದ ರಾಜ್ಯದ ಮಹಿಳೆಯರು ಖುಷಿಗೊಂಡಿದ್ದರು, ಆದರೆ ಈಗ ಮೇ ತಿಂಗಳ ನಂತರ ಈ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮೆ ಆಗಿಲ್ಲ, ಈ ಮೂಲಕ ಮಹಿಳೆಯರು ಇನ್ಮುಂದೆ ಗೃಹ ಲಕ್ಷ್ಮಿ ಹಣ ಬರುತ್ತದೆಯೋ ಇಲ್ಲವೋ ಎನ್ನುವ ಆತಂಕದಲ್ಲಿದ್ದು ಈಗ ಸಿಎಂ ಭರವಸೆ ಸಂತಸ ಮೂಡಿಸಿದೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಆ.10 ರವರೆಗೆ ಅವಕಾಶ, ಇಲ್ಲಿದೆ ಡೈರೆಕ್ಟ್ ಲಿಂಕ್
ಹೌದು, ಮೊನ್ನೆ ಮಾದ್ಯಮ ವರದಿಗಾರರ ಪ್ರಶೆಗೆ ಉತ್ತರಿಸಿದ ಸಿಎಂ ಮೇ ತಿಂಗಳ ತನಕ ಹಣ ಖಾತೆಗೆ ಜಮೆ ಮಾಡಲಾಗಿದ್ದು, ಇನ್ನುಳಿದ ಜೂನ್ ಜುಲೈ ಕಂತಿನ ಬಾಕಿ ಉಳಿದ ಹಣವನ್ನು ಶೀಘ್ರದಲ್ಲೇ ಜಮೆ ಮಾಡುವ ಭರವಸೆ ನೀಡಿದ್ದಾರೆ.
ಅನ್ನಭಾಗ್ಯ ಯೋಜನೆಯ ಜುಲೈ ತಿಂಗಳ ಹಣ ಬಿಡುಗಡೆ|Annabhagya July amount credited
ಮುಂದಿನ ವಾರದೊಳಗಾಗಿ ಅಂದರೆ ಆಗಸ್ಟ್ 15 ರ ಒಳಗಾಗಿ ಗೃಹಲಕ್ಷ್ಮಿ ಯೋಜನೆಯ ಬಾಕಿ ಉಳಿದಿರುವ ಕಂತಿನ ಹಣ ಮಹಿಳೆಯರ ಖಾತೆ ಸೇರುವ ನಿರೀಕ್ಷೆ ಇದೆ.
ಸಿಎಂ ಸಿದ್ದರಾಮಯ್ಯರವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಯಾವುದೇ ಕಾರಣಕ್ಕೂ ನಮ್ಮ ಯಾವ ಯೋಜನೆಯೂ ನಿಲ್ಲುವ ಪ್ರಶ್ನೆ ಇಲ್ಲವೆಂದು ತಿಳಿಸಿದ್ದಾರೆ.
1 thought on “ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ, ಸಿಎಂ ಸಿದ್ದರಾಮಯ್ಯ”