ಸ್ನೇಹಿತರೆ ಅನ್ನಭಾಗ್ಯ ಯೋಜನೆಯ ಜುಲೈ ತಿಂಗಳ ಹಣವು ಸರ್ಕಾರವು ಬಿಡುಗಡೆ ಮಾಡಿದ್ದು (Annabhagya July amount credited), ರಾಜ್ಯದ ಎಲ್ಲಾ ಬಿಪಿಎಲ್ (BPL) ಹಾಗೂ ಅಂತ್ಯೋದಯ (AAY) ಕಾರ್ಡುದಾರರ ಮುಖ್ಯಸ್ಥರ ಖಾತೆಗೆ ಹಣ ಜಮೆಯಾಗಿದೆ.
ಅನ್ನಭಾಗ್ಯ ಯೋಜನೆಯ ಜುಲೈ ಹಣ ಬಿಡುಗಡೆ (Annabhagya July amount credited) :
ಈ ಬಾರಿಯ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಲ್ಲಿ ಸರ್ಕಾರವು ಮೊದಲು ನೀಡಲಾಗುತ್ತಿದ್ದ 5ಕೆಜಿ ಅಕ್ಕಿ ಬದಲಿಗೆ 10ಕೆಜಿ ಅಕ್ಕಿಯನ್ನು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಉಚಿತವಾಗಿ ನೀಡುವುದೆಂದು ಘೋಷಿಸಿತ್ತು, ಆದರೆ ಅಕ್ಕಿಯ ಕೊರತೆಯ ಕಾರಣ 5ಕೆಜಿ ಗೆ ಬದಲಾಗಿ ಅದರ ಹಣವನ್ನು ಕುಟುಂಬದ ಮುಖ್ಯಸ್ಥನ ಖಾತೆಗೆ ಜಮೆ ಮಾಡುವುದೆಂದು ತಿಳಿಸಿತ್ತು.
ಅದರಂತೆ ರಾಜ್ಯ ಸರ್ಕಾರವು ಕೆಜಿಗೆ 34 ರೂಪಾಯಿಯಂತೆ 5ಕೆಜಿ ಅಕ್ಕಿಗೆ ಒಟ್ಟು 170 ರೂಪಾಯಿಯನ್ನು ಕಾರ್ಡ್ನಲ್ಲಿರುವ ಎಲ್ಲಾ ಸದಸ್ಯರಿಗೂ ನೀಡುತ್ತಿದ್ದು, ಎಲ್ಲಾ ಸದಸ್ಯನ ಒಟ್ಟು ಹಣವನ್ನು ಪಡಿತರ ಚೀಟಿಯಲ್ಲಿ ಮುಖ್ಯಸ್ಥನ ಖಾತೆಗೆ ಜಮೆ ಮಾಡಲಾಗುತ್ತಿದೆ.
ಇದರಂತೆ ಪ್ರತೀ ತಿಂಗಳು ರಾಜ್ಯಸರ್ಕಾರವು ಹಣವನ್ನು ಜಮೆ ಮಾಡುತ್ತಿದ್ದು, ಈಗ ಜುಲೈ ತಿಂಗಳ ಹಣ ಕೂಡ ಬಿಡುಗಡೆ ಮಾಡಲಾಗಿದೆ.
ಈಗಾಗಲೇ ಜುಲೈ ತಿಂಗಳ ಹಣವನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಪಡಿತರ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದ್ದು, ನೀವು ನಿಮ್ಮ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಚೆಕ್ ಮಾಡಿಕೊಳ್ಳ ಬಹುದಾಗಿದೆ.
ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ, ಸಿಎಂ ಸಿದ್ದರಾಮಯ್ಯ
ನಿಮಗೆ ಬಂದಿರುವ ಹಣವನ್ನು ಹೀಗೆ ಚೆಕ್ ಮಾಡಬಹುದು :
ಅನ್ನಭಾಗ್ಯ ಯೋಜನೆಯ ಹಣವು ಪಡಿತರ ಚೀಟಿಯಲ್ಲಿರುವ ಮುಖ್ಯ ಸದಸ್ಯನ ಖಾತೆಗೆ ಜಮೆಯಾಗಲಿದ್ದು, ಅವರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ, ಆದ್ದರಿಂದ ನಿಮ್ಮ ಬ್ಯಾಂಕ್/ಪೋಸ್ಟಲ್ ಖಾತೆ ಪರಿಶೀಲಿಸಬಹುದಾಗಿದೆ.
ಇನ್ನು ನೀವು ಆಹಾರ ಇಲಾಖೆಯ ವೆಬ್ಸೈಟ್ ನಲ್ಲಿ ನಿಮ್ಮ ಪಡಿತರ ಕಾರ್ಡ್ ಸಂಖ್ಯೆ ದಾಖಲಿಸಿ ಪ್ರತೀ ತಿಂಗಳ ವಿವರ ನೋಡಬಹುದಾಗಿದೆ.
ನಿಮಗೆ ಬಂದಿರುವ ಅನ್ನಭಾಗ್ಯ ಹಣವನ್ನು ಇಲ್ಲಿ ಚೆಕ್ ಮಾಡಿ|annabhagya DBT amount check
ಇನ್ನು DBT Karnataka ಎನ್ನುವ ಆ್ಯಪ್ ಮೂಲಕವೂ ನಿಮ್ಮ ಮೊಬೈಲ್ ನಲ್ಲೆ ನಿಮಗೆ ಜಮೆಯಾಗಿರುವ ಹಣದ ವಿವರ ನೋಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ :
3 thoughts on “ಅನ್ನಭಾಗ್ಯ ಯೋಜನೆಯ ಜುಲೈ ತಿಂಗಳ ಹಣ ಬಿಡುಗಡೆ|Annabhagya July amount credited”